"शन्तनुः" इत्यस्य संस्करणे भेदः

No edit summary
पङ्क्तिः १:
'''ಶಂತನು''' [[ಮಹಾಭಾರತ|ಮಹಾಭಾರತದಲ್ಲಿ]] [[ಹಸ್ತಿನಾಪುರ|ಹಸ್ತಿನಾಪುರದ]] ರಾಜ. ಇವನು ಚಂದ್ರ ವಂಶದ [[ಭರತ]] ಕುಲದವನು ಮತ್ತು [[ಪಾಂಡವರು]] ಮತ್ತು [[ಕೌರವ|ಕೌರವರ]] ಪೂರ್ವಜ.
सः पौरवकुलस्य राजा आसीत्।
*[[प्राचीन-वंशावली]]
*[[पौरवकुल]]
 
==ಶಂತನು ಮತ್ತು ಗಂಗಾ==
ಒಮ್ಮೆ [[ಗಂಗಾ ನದಿ|ಗಂಗಾ]] ತೀರದಲ್ಲಿ ಸಂಚರಿಸುತ್ತಿದ್ದಾಗ ಶಂತನು ಒಬ್ಬಳು ಅನನ್ಯ ಸೌಂದರ್ಯವತಿಯನ್ನು ನೋಡಿದನು. ಅವಳಿಗೆ ಎಷ್ಟು ಆಕರ್ಷಿತನಾದನೆಂದರೆ ಅವಳನ್ನು ಮದುವಯಾಗುವಂತೆ ಕೇಳಿಕೊಂಡನು. ಆ ಸುಂದರಿ ಮದುವೆಗೆ ಒಪ್ಪಲು ಒಂದು ಷರತ್ತನ್ನು ವಿಧಿಸಿದಳು. ಅದರ ಪ್ರಕಾರ, ಯಾವುದೇ ಕ್ಷಣ ರಾಜನು ಅವಳು ಏನೇ ಮಾಡಿದರೂ ಪ್ರಶ್ನೆ ಮಾಡಬಾರದು, ಮಾಡಿದರೆ ಅವನನ್ನು ಬಿಟ್ಟು ಹೋಗುವುದಾಗಿ ಹೇಳಿದಳು. ರಾಜನು ಇದಕ್ಕೆ ಒಪ್ಪಿ ವಿವಾಹ ನೆರವೇರಲ್ಪಟ್ಟಿತು.
 
ಸ್ವಲ್ಪ ಕಾಲ ಕಳೆಯಲು ರಾಜನಿಗೆ ಒಂದು ಗಂಡು ಮಗುವನ್ನು ಹೆತ್ತಳು. ಆದರೆ ಹುಟ್ಟಿದ ತಕ್ಷಣ ಮಗುವನ್ನು ಗಂಗಾ ನದಿಗೆ ಎಸೆದುಬಿಟ್ಟಳು. ರಾಜನಿಗೆ ಇದರಿಂದ ಸಖೇದಾಶ್ಚರ್ಯವಾದರೂ, ಪತ್ನಿ ಬಿಟ್ಟುಹೋಗುವುದನ್ನು ಸಹಿಸಲಾರದೇ ಅವಳಿಗೆ ಏನೂ ಪ್ರಶ್ನೆ ಮಾಡಲಿಲ್ಲ. ಆದರೆ ಈ ಪರಿಪಾಟ ಮುಂದಿನ ಆರು ಹಸುಗೂಸುಗಳಿಗೂ ಆಯಿತು.
 
ಆದರೆ ಎಂಟನೆಯ ಮಗು ಹುಟ್ಟಿ ಈ ಕೂಸನ್ನೂ ತನ್ನ ಪತ್ನಿ ನದಿಗೆ ಎಸೆಯುವುದನ್ನು ನೋಡಿದಾಗ ರಾಜನಿಗೆ ಸಿಟ್ಟು ತಡೆಯಲಾಗಲಿಲ್ಲ. ಅವಳನ್ನು ತಡೆದು ಕೂಸುಗಳನ್ನು ನದಿಗೆ ಎಸೆಯಲು ಕಾರಣವೇನೆಂದು ಕೇಳಿದಾಗ ಆ ಸುಂದರಿ ತನ್ನ ನಿಜವಾದ ಗುರುತನ್ನು ತೋರಿ, ತಾನು ಗಂಗೆಯೆಂದು ಹೇಳಿ, ತಾನು ಮಗುವನ್ನು ಕರೆದುಕೊಂಡು ಹೋಗಿ ಕಾಲಾಂತರದಲ್ಲಿ ರಾಜನಿಗೆ ಹಿಂದಿರುಗಿಸುವುದಾಗಿ ಹೇಳಿದಳು.
 
ಶಂತನು ಅವಳ ಈ ನಿರ್ಗಮನದಿಂದ ಬಹಳಷ್ಟು ನೊಂದು, ವರ್ಷಾನುಗಟ್ಟಳೆ ತನ್ನ ಮಗನ ವಾಪಸಾತಿಗೆ ಕಾದನು. ತನ್ನ ಮಾತಿನಂತೆ ಗಂಗೆ ರಾಜನ ಮಗನನ್ನು ಹಿಂದಿರುಗಿಸಿದಳು. ಆ ಮಗು ಈಗ ಯುವಕನಾಗಿ ಬೆಳೆದಿದ್ದ. ಈ ಯುವಕನೇ [[ದೇವವ್ರತ]]. ಇವನು [[ಭೀಷ್ಮ]] ಎಂಬ ಹೆಸರಿನಿಂದ ಪರಿಚಿತ. ಮಹಾಭಾರತದ ಕೇಂದ್ರ ಪಾತ್ರಗಳಲ್ಲಿ ಒಬ್ಬ.
 
==ಶಂತನು ಮತ್ತು ಸತ್ಯವತಿ==
ದೇವವ್ರಥನು ಒಬ್ಬ ಆಕರ್ಷಕ ಯುವಕನಾಗಿ ಬೆಳೆದಾಗ ಶಂತನು ಮೀನುಗಾರನ ಮಗಳಾದ [[ಸತ್ಯವತಿ|ಸತ್ಯವತಿಯನ್ನು]] ನೋಡಿ ಮೋಹಿತನಾದನು. ಅವಳ ತಂದೆಯು ಮದುವೆಗೆ ಒಪ್ಪಲು ಷರತ್ತನ್ನು ವಿಧಿಸಿದನು. ಇದರ ಪ್ರಕಾರ[[ಸತ್ಯವತಿ]] ಜನ್ಮ ನೀಡುವ ಯಾವುದೇ ಸಂತಾನ ಸಿಂಹಾಸನಕ್ಕೆ ಅಧಿಕಾರಿಯಾಗಬೇಕು ಎಂದು.
 
ದೇವವ್ರಥನಿಗೆ ಇದರಿಂದ ಅನ್ಯಾಯವಾಗುವುದೆಂದು ಅರಿತ ಶಂತನು ಈ ಷರತ್ತಿಗೆ ಒಪ್ಪಲಾರದೇ ಹಿಂದಿರುಗಿದನು. ಆದರೆ ದೇವವ್ರಥನು ಇದನ್ನರಿತು ಸಿಂಹಾಸನದ ಆಸೆಯನ್ನು ತೊರೆದು [[ಸತ್ಯವತಿ|ಸತ್ಯವತಿಯ]] ಸಂತಾನವೇ ಸಿಂಹಾಸನವೇರುವುದಾಗಿ ಮಾತು ಕೊಟ್ಟನು. ಇನ್ನೂ ಸಂದೇಹದಿಂದಿದ್ದ ಮೀನುಗಾರನನ್ನು ಒಪ್ಪಿಸಲು ಮತ್ತು [[ಸತ್ಯವತಿ|ಸತ್ಯವತಿಯ]] ಸಂತಾನದ ಮುಂದಿನ ಪೀಳಿಗೆಗಳು ರಾಜ್ಯಭಾರ ಮಾಡಲು ಅನುವು ಮಾಡಿಕೊಡಲು ಜೀವನ ಪರ್ಯಂತ ಬ್ರಹ್ಮಚರ್ಯವನ್ನು ಆಚರಿಸುವುದಾಗಿ ಪ್ರತಿಜ್ಞೆ ಮಾಡಿದನು.ಹೀಗೆ ಅವನ ಹೆಸರು ಭೀಷ್ಮೆ ಎಂದಾಯಿತು.
 
ಶಂತನು ಮತ್ತು [[ಸತ್ಯವತಿ|ಸತ್ಯವತಿಗೆ]] ಇಬ್ಬರು ಗಂಡು ಮಕ್ಕಳಾದರು, ಇವರು [[ಚಿತ್ರಾಂಗದ]] ಮತ್ತು [[ವಿಚಿತ್ರವೀರ್ಯ]]. ಶಂತನುವಿನ ಮರಣದ ನಂತರ ಸತ್ಯವತಿಯು ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ರಾಜ್ಯಭಾರ ಮುಂದುವರಿಸಿದಳು, ಇದಕ್ಕೆಭೀಷ್ಮೆ ಸಹಾಯವಿದ್ದಿತು.
 
{{महाभारतम्}}
 
[[bn:শান্তনু]]
[[en:Shantanu]]
[[eo:Ŝantano]]
[[es:Shámtanu]]
[[fa:شانتانو]]
[[gu:શાંતનુ]]
[[id:Santanu]]
[[ja:シャーンタヌ]]
[[jv:Santanu]]
[[ml:ശന്തനു]]
[[mr:शंतनू]]
[[pt:Santanu]]
[[ru:Шантану]]
[[su:Santanu]]
[[ta:சாந்தனு]]
[[te:శంతనుడు]]
[[th:ศานตนุ]]
[[वर्गः:प्राचीनराजाः]]
"https://sa.wikipedia.org/wiki/शन्तनुः" इत्यस्माद् प्रतिप्राप्तम्